Saturday, December 30, 2017

ಮೌಲ್ಯ ಅಮಾನ್ಯದ  ವ್ಯಾಖ್ಯಾನ ನಾವೆಲ್ಲರೂ ಕೇವಲ ಒಂದು ವರುಷದ ಹಿಂದಿನಿಂದ ಕೇಳುತ್ತಿದ್ದೇವೆ, ಬಹಳಷ್ಟು ಜನ ಮೊದಲೇ ಕೇಳಿರಬಹುದು, ಆದರೆ ಮೌಲ್ಯ ಅಮಾನ್ಯದ ಉಲೇಖ ರಾಮಾಯಣದಲ್ಲು  ಇದ್ದದು ಓದಿ ಇಡೀ ದಿನವೆಲ್ಲ ತಡಕಾಡತೊಡಗಿದೆ.
ಶ್ರೀ ರಾಮಚಂದ್ರರ ಪಟ್ಟಾಭಿಷೇಕವಾಗುವ ಮುನ್ನ ,ಪ್ರಜೆಗಳು ಬಹಳ ನೊಂದಿದ್ದರು , ಪಟ್ಟಾಭಿಷೇಕವಾದ ನಂತರ ಶ್ರೀ ರಾಮರು ಮಾಡಿದ ಎರಡನೇ ಆಜ್ಞೆಯೇ  ಮೂಲ್ಯ ಅಮಾನ್ಯ. ಹಾಗಾದರೆ ಮೊದಲ ಆಜ್ಞೆಯೇನಿರಬಹುದು ? ಇದರ ಬಗ್ಗೆ ಇಳಿದು ಕೊಳ್ಳುವುದು ಬಹಳ ಸುಲಭ, ಏಕೆಂದರೆ ಈಗಿನ ಬಲಿಷ್ಠ ರಾಷ್ಟ್ರವಾದಂತ ರಷ್ಯಾ ಅದನ್ನು ಪಾಲಿಸುತ್ತಿದೆ. ಪ್ರಜೆಗಳಿಂದ ರಾಜನೇ ಹೊರತು, ರಾಜನಿಂದ ಪ್ರಜೆಯಲ್ಲ, ಅಂದರೆ ಪ್ರಜೆಗಳ ಕೆಲಸವೇ ರಾಜ್ಯ ಅಥವಾ ರಾಷ್ಟ್ರವನ್ನು ಕಟ್ಟುವುದು, ಪ್ರಜೆ ದೇಶಕ್ಕಾಗಿ ದುಡಿಯಬೇಕು ಸ್ವಂತಕ್ಕಲ್ಲ, ಪ್ರಜೆಯ ಮನೆ ಮನೆಯಲ್ಲ , ಅದು ನೆಲೆ. ಪ್ರಜೆ ದುಡಿಯುವ ಭೂಮಿ ಪ್ರಜೆಯಾದಲ್ಲ ಅದು ರಾಷ್ಟ್ರದ ಸಂಪತ್ತು. ಹೀಗೆ ಪ್ರಜೆ ಹೇಗೆ ದುಡಿಯುವನು ಹಾಗೆ ರಾಷ್ಟ್ರ ಅಥವಾ ರಾಜ್ಯ ಅವನನ್ನು ಗುರುತಿಸಿ ಅವನಿಗೆ ಗೌರವಿಸುವುದು. ಹೀಗೆ ಹಲವಾರು ತಂತ್ರಗಾರಿಕೆ ಇಂದ ಕೊಡಿತ್ತು ಶ್ರೀರಾಮರ ಪ್ರಜಾರಾಜ್ಯದ ಮೊದಲ ಆಜ್ಞೆ.  ಎರಡನೇ ಆಜ್ಞೆಯೇ ಮೂಲ್ಯ ಅಮಾನ್ಯ. ಆಕಾಲದಲ್ಲಿ ನೋಟ್ ಇರಲ್ಲಿಲ್ಲ, ಹಾಗಾದರೆ ಡೆಮೋನಿಟೈಝಷನ್ ಹೇಗಾಗಿರಬಹುದೆಂಬ ತಿಳಿದುಕೊಳ್ಳುವ ಕುತೂಹಲ.. ಹಾಗೆ ಓದಿದ ಮೇಲೆ ಗೊತ್ತಾಯಿತು ಮುದ್ರೆ ಅಥವಾ ಹಾಲ್ಮಾರ್ಕ್ ನ ಒಳಾರ್ಥ. ಶ್ರೀ ರಾಮರು ಮಾಡಿದ ಆಜ್ಞೆಯಲ್ಲಿ , ಪ್ರಜಾವ್ಯವಸ್ಥೆ ಯನ್ನೇ ಅಲುಗಾಡಿಸುವ ಆಜ್ಞೆ ಅದಾಗಿತ್ತು. ಪ್ರಜೆಗಳು ಸಂಪಾದಿಸಿದ ವಜ್ರ ಖಚಿತ ಚಿನ್ನಾಭರಣಕ್ಕೆ ರಾಜಮುದ್ರೆಯಾಗಬೇಕು , ರಾಜಮುದ್ರೆಯಾಗದ ಆಭರಣವು ತೃಣಕ್ಕೆ ಸಮಾನ. ಈ ಕಾರಣದಿಂದ ಕಾಳಧನಿಕರ ಹೃದಯದಲ್ಲಿ ಅಡಗಿದ್ದ ಭಯದ ಶಬ್ದ ಆಜ್ಞೇಯ   ವಿರೋಧಾರ್ಥಕವಾಗಿ ಕರ್ಣ ಕಠೋರವಾಗಿ ಶ್ರೀ ರಾಮರನ್ನು ದೂಷಿಸಿತ್ತು.  ಆದ ಕಾರಣ ಶ್ರೀ ರಾಮರ ರಾಜ್ಯ ರಾಮರಾಜ್ಯವಾಗಿಬದಲಾಗಲು, ಆ ಆಜ್ಞೆ ಮಾಡಿದ ಎರಡನೇ ದಿನದಿಂದ ೭ ವರುಷ ೩ ತಿಂಗಳುಗಳು ಸಂದವು.
ಮೌಲ್ಯ  ಅಮಾನ್ಯದ ಶ್ರೀ ರಾಮರ ನೋಟದ  ಬಗ್ಗೆ ಇನ್ನು ಬಹಳಷ್ಟು ಓದುವುದಿದೆ,ಅದನ್ನರಿತು ಮುಂದೆ ಬರಿಯುತ್ತೇನೆ.

---ಸಂಕೇತ್---

No comments:

Post a Comment