Sunday, April 26, 2020

ಓಮ್ ತತ್ಪುರುಷಾಯ ವಿದ್ಮಹೆ ಮಹಾಸೇನಾಯ ಧೀಮಹಿ, ತನ್ನೋ ಷಣ್ಮುಖ ಪ್ರಚೋದಯಾತ್...

ಗಧಾಯುದ್ದ ಕುರುಕ್ಷೇತ್ರದ ಯುದ್ಧದ ಒಂದು ಅಧ್ಯಾಯ.
ನಮ್ಮೆಲ್ಲಾರಿಗೆ ತಿಳಿದಿರುವಹಾಗೆ, ದುರ್ಯೊಧನ ಭೀಮನಿಗಿಂತ ಬಲವಂತ, ಮೂರುವರೆ ವಜ್ರಗಳಲ್ಲಿ ಒಬ್ಬ. ಹಾಗಿದ್ದರೂ ಏಕೆ ಭೀಮನ ಪ್ರಹಾರಕ್ಕೆ ಸಿಲುಕ್ಕಿ ಹತನಾದ ಎಂಬುದು ಸಹಜವಾದ ಪ್ರಶ್ನೆ. ಬಲರಾಮರ ಶಿಶ್ಯರಾದ ಭೀಮ ದುರ್ಯೋಧನರ ಕಾಳಗ ಜಗತ್ಪ್ರಸಿದ್ದವಾದದ್ದು. ಗಧಾಯುದ್ಧವನ್ನು ಬಹಳ ವಿವರವಾಗಿ ತಿಳಿಯಬೇಕಾದರೆ ನಾವು ರನ್ನ ರ ಗಧಾಯುದ್ಧವನ್ನು ಒದಬೇಕು.

ನೂರು ಆನೆಯಬಲ ಭೀಮನಿಗಿದ್ದರೆ ಸಾವಿರ ಆನೆಯ ಬಲ ದುರ್ಯೋಧನನಿಗಿದ್ದದು ನಿಜ, ಹಾಗಿದ್ದರು ಏಕೆ ಭೀಮ ಬಲ ದುರ್ಯೋಧನನ್ನು ಮಣಿಸುವಲ್ಲಿ ಸಫಲವಾಯಿತು ? ಆದರೆ ಇಲ್ಲಿ ಇನ್ನೊಂದ್ದನ್ನು ನಾನು ತಿಳಿಯಬೇಕಾದಂತ್ತದು ಇದೆ, ಬಲರಾಮರ ಪ್ರಿಯ ಶಿಶ್ಯ ದುರ್ಯೋಧನ, ಗಧಾಯುದ್ದ ವಾಗಬೇಕಾದರೆ ಬಲರಾಮರು ಅಲ್ಲಿ ಉಪಸ್ಥಿತರಿದ್ದು ದುರ್ಯೋಧನನ್ನು ಹುರಿದುಂಬಿಸುವ ಕಾರ್ಯವನ್ನು ಅವರು ಮಾಡುತ್ತಿದರೂ ದುರ್ಯೋಧನ ಕಾಳಗದಲ್ಲಿ ಸೋಲನ್ನು ಅನುಭವಿಸಬೇಕಾಯಿತು.

ಮಹಾಭರತದ್ದಲ್ಲಿ ಭೀಮ ಬಲರಾಮರ ಒಂದು ಪ್ರಸಂಗವಿದ್ದು, ಅದರಲ್ಲಿ ಶ್ರೀ ಕೃಷ್ಣ ಭೀಮನಿಗೆ ಬಲರಾಮರು ಪ್ರಪಂಚಪರ್ಯಟನೆಗೆ ಹೊರಡುವಮುನ್ನ ಅವರಲ್ಲಿ ಹೋಗಿ ಅವರ ಆಶೀರ್ವದವನ್ನುಪಡೆ ಎಂದು ಹೇಳಿದ್ದನು, ಹಾಗೆಯೇ ಭೀಮ ಬಲರಾಮರಲ್ಲಿ ಹೋಗಿ ಆಶೀರ್ವಾದವನ್ನು ಪಡೆದು ಭೀಮನಿಂದ ಭೀಮಸೇನನಾಗಿ , ಕುರುಕ್ಷೇತ್ರ ಯುದ್ಧದಲ್ಲಿ ಮಹಾಸೇನೆಯನ್ನು ಮಣಿಸುವಲ್ಲಿ ಸಫಲನಾದ. ಬಲರಾಮರ ಆಶೀರ್ವಾದ ಭೀಮನ ಮೇಲೆ ಹಾಗು ಪ್ರೀತಿ ದುರ್ಯೋಧನನ ಮೇಲಾಯಿತು.  ಈ ದಿನ ಅಕ್ಷಯತ್ರಿತಿಯ ಬಲರಾಮರ ಜನ್ಮದಿನವಾದ್ದುದರಿಂದ ಈ ಸಣ್ಣ ಪ್ರಸಂಗದ ಅಪರಿಚಿತರಿಗೆ ಪರಿಚಯಿಸುವ ಒಂದು ಪ್ರಯತ್ನ.

ತನ್ನೊ ಷಣ್ಮುಖ ಪ್ರಚೋದಯಾತ್......
....
ಸಂಕೇತ ಕಶ್ಯಪ್

No comments:

Post a Comment