Saturday, December 30, 2017

ಮೊದಲ ಬಾರಿಗೆ ಪ್ರಧಾನ ಮಂತ್ರಿ ನಮ್ಮವರೆನ್ನುವ ಭಾವ ನಮ್ಮಲ್ಲಿ ಮೂಡಿದೆ. ಶ್ರೀಯುತ  ನರೇಂದ್ರ ಮೋದಿರವರು ಚಿರಾಯುವಾಗಲಿ ಎಂದು ಆ ಭಗವಂತ ನಲ್ಲಿ ಪ್ರಾರ್ಥಿಸುತ್ತೇನೆ.
 ಮನಷ್ಯನಿಗೆ ಊಟದ ಬದಲು ಊಟ ಗಳಿಸುವ ಒಳ್ಳೆಯ ವಿದ್ಯೆ ಯನ್ನು ನೀಡಿದರೆ ಅದು ಇನ್ನು ಹಲವರಿಗೂ ಉಪವಾಸದ ಕ್ಲಿಷ್ಟ ಸಮಸ್ಯೆಯನ್ನು ಹಾಗು ಸಮಾಜದಲಿ ವಿನಯ ಭಾವ ಮೂಡುತ್ತದೆ. ವಿದ್ಯಾದಾನವೇ ಶ್ರೇಷ್ಠವಾದ ದಾನ, ನವಿರುವರೆಗೂ ಬೇರೆಯವರಿಗೆ ಊಟ ಹಾಕಬಹುದು, ನಾವು ಹೋದಮೇಲೆ ಅವರಗತಿ ಏನು ? ಹಾಗಾಗಿ ಗಳಿಸುವ ವಿದ್ಯೆಯನ್ನು ಹೇಳಿಕೊಟ್ಟರೆ ಮುಂದೆ ಅವರು ಹಾಗು ಇತರರು ಸುಖವಾಗಿರಬಹುದು.
ಮೋದಿಜಿ, ಎರಡು ವರುಷದ ಹಿಂದೆ ಸೆಂಟ್ರಲ್ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳಿಗೆ, ವಿಜ್ಞಾನದ ಪುಸ್ತಕದ ಬೆಲೆ ೪ ಸಾವಿರದಮೇಲು ದಾಟಿತ್ತು . ಇದರ ಮೂಲ ಪುಸ್ತಕ ಪ್ರಕಾಶನದ ದಬ್ಬಾಳಿಕೆ. ಪೋಷಕರು ಆ ಪುಸ್ತಕ ಸಿಗದೇ ಒದ್ದಾಡುತ್ತಿದರು, ಇದರಿಂದ ಹೊರಗೆ ಬರಲು ಪೋಷಕರು ಮಕ್ಕಳು ಹಪಹಪಿಸುತ್ತಿದರು. ಇದ್ದನರಿತ ಪೋಷಕರು, ಹೋಗಿದ್ದು ಮೋದಿಜಿಯ ಮೊರೆಗೆ.
ಎಲ್ಲವನ್ನು ಅರಿತ ಮೋದಿಜಿ, ಮುಂದಿನ ಶೈಕ್ಷಣಿಕ ವರುಷದಲ್ಲಿ , ಪೋಷಕರು ಶಾಲೆಯ ಮುಖಾಂತರ ಮಗುವಿನ ವಯಸ್ಸು ಹಾಗು ತರಗತಿಯ ಮಾಹಿತಿಯನ್ನು ಕೊಟ್ಟರೆ, ಪುಸ್ತಕಗಳು ನೇರ ಮನೆಗೆ ಬಂದು ಸೇರುವುದು. ಇಂತಹ ಮತ್ಕಾರ್ಯವನ್ನು ಮಾಡಿಕೊಟ್ಟ ನಿಮಗೆ ನಮ್ಮಿಂದ ತುಂಬು ಹೃದಯದ ಧನ್ಯವಾದ. ಇಷ್ಟು ವರುಷಗಳ ನಂತರ ಬಹಳಷ್ಟು ಜನಕ್ಕೆ, ನಾವು ಭಾರತೀಯರು ಎಂಬ ಗರ್ವ ಬರುತ್ತಿದೆ. ನಿಮಗೆ ಆ ಭಗವಂತ ಆಯುರಾರೋಗ್ಯವನ್ನು ನೀಡಲಿ ಎಂದು ಅವನಲ್ಲಿ ಪ್ರಾರ್ಥಿಸುತ್ತೆನೆ.
ಜೈ ಹಿಂದ್, ಲೋಕಸಮಸ್ತ ಸುಖಿನೋ ಭವಂತು......
..ಸಂಕೇತ್ ಕಶ್ಯಪ್. .

No comments:

Post a Comment