Monday, November 21, 2011

kannadave satya.........


ಒಂದು ಕವನ ಬರೆಯಬೇಕಾದರೆ ಸಾವಿರ ಪುಸ್ತಕಗಳ್ಳನ್ನು ಓದಿ ಸಾಹಿತ್ಯ ಭಂಡಾರ ಸಂಪಾದಿಸಿರಬೇಕು..... ಬರೆಯಬೇಕೆಂದು ಬರೆಯುತ್ತಾ ಹೋದರೆ ಅದು ಕವನವಾಗುವುದಿಲ್ಲ ಕಪಿತ್ವವಾಗುತ್ತದೆ... ನಮ್ಮ ಪ್ರತಿಷ್ಟೆಯ ಪಯೋಜನವೆಲ್ಲಿಯಾದರೂ ಆದರೆ, ನಮ್ಮ ಪ್ರತಿಷ್ಟೆಗೆ ಒಂದು ಅರ್ಥವಿರುತ್ತದೆ.
ಈ ಪ್ರತಿಷ್ಟೆಯನ್ನು ಉಳಿಸಿಕೊಳ್ಳುವದಿಕ್ಕೆ ನಮ್ಮ ಕನ್ನಡದಲ್ಲಿ ಬಹಳಷ್ಟು ಜನ ಭಾಷೆಯ ಪ್ರಯೋಗ ಮಾಡುತ್ತಾ ಈ ಭಾಷೆಯಲ್ಲಿರುವುದೇ ಇಷ್ಟಾ ಅನ್ನೊ ಮನೋಭಾವ ಇತರರಿಗೆ ಮೋಡಿಸುತ್ತಿದ್ದಾರೆ, ಪ್ರತಿಷ್ಟೆಯಮಧ್ಯೆ ಸಿಲುಕಿ ನಮ್ಮ ಕನ್ನಡ ತನ್ನ ತನವನ್ನು ಕಳೆದುಕೋಳ್ಳುತ್ತಿದೆ, ನಮ್ಮ ಕನ್ನಡ ಚಿತ್ರಗಳಲ್ಲಿ ಬರುತ್ತಿರುವ ಹಾಡುಗಳಾಗಲೀ ಅಥವ ಸಂಭಾಷಣೆಗಳಾಗಲಿ, ಯಾವುದೋ ಪರಭಾಷಾವ್ಯಮೋಹದಿಂದ ನಮ್ಮ ಕನ್ನಡಕ್ಕೆ ಧಕ್ಕೆ ತರುವ ಹಾಗಿರುತ್ತದೆ.

ಇತ್ತೀಚೆಗೆ ಬಂದ ಚಿತ್ರಗಳ ಹಾಡುಗಳು, ಕುರಿಯನ್ನು ಉದ್ದೇಶಿಸಿ ಇಲ್ಲವೇ ಕರಡಿಯನ್ನು ಉದ್ದೇಶಿಸಿ ಬರೆಯುವುದಾಗಿದೆ. ಹಾಗಂತ ಅವುಗಳ ವರ್ಣನೆ ಯನ್ನಾದರೂ ಮಾಡಿದ್ದರೆ ಒಂದು ಅರ್ಥವಿರುತ್ತಿತ್ತು. ಅದರ ಬದಲಿಗೆ ಅದನ್ನು ತಿನ್ನುವುದು ಹೇಗೆ ಅಥವ ಅದಕ್ಕೆ ತಿನ್ನಿಸುವುದು ಹೇಗೆಂದು ಬರೆಯಲಾಗಿದೆ. ಇದು ಹಾಡಿನ ಸ್ವರ ಸಂಯೋಜನೆಗೆ ಹಾಗು ಪರಭಾಷಿಯರಿಗೆ ಹಾಡಲು ಅನುಕೂಲ ಅವಷ್ಯಕತೆಗೆ ಬೇಕಾದಂತೆ ರಚಿಸಲಾಗಿರುವುದು ಶೋಚನೀಯ.
 
ಇತ್ತೀಚೆಗೆ ಬಂದ ಯಾವ ಹಾಡಾಗಲೀ ನಮ್ಮ ಮನದಲ್ಲಿ ಉಳಿಯುತ್ತಿಲ್ಲ, ಇದಕ್ಕೆ ಕಾರಣ ಹಾಡಿನ ಅರ್ಥ.  ಅರ್ಥಬಧ್ದವಾಗಿ ರಚಿಸಿದ, ಹಾಗು ಸಂದರ್ಭಕ್ಕೆ ಸಂಯೋಜಿಸಿದ್ದ ಎಲ್ಲಾ ಹಳೆಯ ಹಾಡುಗಳೂ ನಮ್ಮ ಮನದಲ್ಲೂ ಬಾಯಲ್ಲೂ ಉಳಿದಿದೆ. ಈ ರೀತಿ ಹಾಡುಗಳಾಗಲಿ ಅಥವ ಸಂಭಾಷಣೆಗಳಾಗಲೀ ಈಗೇಕೆ ಬರುತ್ತಿಲ್ಲ? ಕನ್ನಡ ಸಾಹಿತ್ಯಕ್ಕೇನು ಕೊರತೆ ಇಲ್ಲ. ರಚಿಸಿ ಹಾಡುಗಳನ್ನು ಸಂಭಾಷಣೆಗಳ್ಳನ್ನು, ಆದರೆ ಭಾಷೆಯ ಸಿರಿತನವನ್ನು ಅರಿತು ಅರ್ಥಬದ್ಧವಾಗಿ ರಚಿಸಿ. ಯಾವುದೋ ಒಂದು ಪರಿಸ್ಥಿತಿಗೆ ಸಿಲುಕಿ ಕನ್ನಡ ತನಕ್ಕೆ ಧಕ್ಕೆ ತರಬೇಡಿ....

                                                                                                                                                                                                                             ಸಂಕೇತ್ ಕಶ್ಯಪ್

4 comments:

  1. Abhinandanegalu!!!!!!!!!!Nimminda innu nirikshisuttidini!!!!!!All THE BEST SANKY!

    ReplyDelete
  2. ಚೆನ್ನಾಗಿದೆ ಸಂಕೇತ್.. ಒಳ್ಳೆಯದಾಗಲಿ

    ReplyDelete